ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಮೃತ, ಮಗನ ಸಾವಿನ ಸುದ್ದಿ ಕೇಳಿ ತಂದೆಗೆ ಹೃದಯಾಘಾತ | Janata news
ಗದಗ : ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು ಆತನ ಸಾವಿನ ಸುದ್ದಿ ಕೇಳಿ ಯುವಕನ ಚಿಕ್ಕಪ್ಪ ಸಹ ಮೃತಪಟ್ಟಿರುವ ಮನಕಲುಕುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಸ ಗಾಡಗೋಳಿ ಗ್ರಾಮದಲ್ಲಿ ನಡೆದಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಸ ಗಾಡಗೋಳಿ ಗ್ರಾಮದಲ್ಲಿನ 29 ವರ್ಷ ವಯಸ್ಸಿನ ಪ್ರವೀಣ್ ವಿದ್ಯುತ್ ಶಾರ್ಟ್ ಸರ್ಕ್ಯೂಟ್ಗೆ ಒಳಗಾಗಿ ಮೃತಪಟ್ಟಿದ್ದರು. ಅವರ ಸಾವಿನ ಸುದ್ದಿ ಕೇಳಿ ಶಾಕ್ನಿಂದ ಆಘಾತಕ್ಕೀಡಾದ ಅವರ ಚಿಕ್ಕಪ್ಪ ಕುಬೇರಪ್ಪ (60) ಕೂಡ ಮೃತಪಟ್ಟಿದ್ದಾರೆ.
ನಿವೃತ್ತ ಶಿಕ್ಷಕರಾಗಿದ್ದ ಕುಬೇರಪ್ಪ ಹೊಸಮನಿ ಅಣ್ಣನ ಮಗನಾದ ಪ್ರವೀಣ್ ನನ್ನು ತಮ್ಮ ಬಳಿಯೆಲ್ಲಿಯೇ ಇರಿಸಿಕೊಂಡು ನೋಡಿಕೊಳ್ಳುತ್ತಿದ್ದರು.
ನಿವೃತ್ತ ಶಿಕ್ಷಕರಾಗಿದ್ದ ಕುಬೇರಪ್ಪ ಹೊಸಮನಿ ಅಣ್ಣನ ಮಗನಾದ ಪ್ರವೀಣ್ ನನ್ನು ತಮ್ಮ ಬಳಿಯೆಲ್ಲಿಯೇ ಇರಿಸಿಕೊಂಡು ನೋಡಿಕೊಳ್ಳುತ್ತಿದ್ದರು. ಪ್ರವೀಣ್ ಶಿಕ್ಷಣ ಸೇರಿದಂತೆ ಎಲ್ಲ ಜವಾಬ್ದಾರಿಗಳನ್ನು ಕುಬೇರಪ್ಪ ತೆಗೆದುಕೊಂಡಿದ್ದರು.
ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.