ಸಿಹಿ ಪೊಂಗಲ್ ತಯಾರಿಸುವ ಸರಳ ವಿಧಾನ.... | Janata news

14 Jan 2020
7429
Sakkarai Pongal (Sweet Pongal) recipe

ಬೆಂಗಳೂರು : ಜನತಾ ನ್ಯೂಸ್ ಓದುಗರಿಗೆ ಸಂಕ್ರಾತಿಯ ಶುಭಾಶಯಗಳು. ಸುಗ್ಗಿ ಹಬ್ಬವಾದ ಸಂಕ್ರಾಂತಿಗೆ ಎಳ್ಳು ಬೆಲ್ಲ, ಸಕ್ಕರೆ ಅಚ್ಛು ಮತ್ತು ಈ ಹುಗ್ಗಿ ಅಥವ ಪೊಂಗಲ್ ವಿಶೇಷ ವಾಗಿದೆ. ಆದ್ದರಿಂದ ನಿಮಗಾಗಿ ಸಿಹಿ ಪೊಂಗಲ್ ಮಾಡುವ ವಿಧಾನ ಇಂದು ತಿಳಿದುಕೊಳ್ಳೋಣ ....

ಬೇಕಾಗುವ ಸಾಮಗ್ರಿಗಳು:
* ಹೆಸರುಬೇಳೆ – 1 ಕಪ್
* ಅಕ್ಕಿ – 1 ಕಪ್
* ಪುಡಿ ಮಾಡಿದ ಬೆಲ್ಲ/ ಸಕ್ಕರೆ – 1 ಕಪ್
* ಏಲಕ್ಕಿ – 1 to 2
* ದ್ರಾಕ್ಷಿ ,ಗೋಡಂಬಿ- 50 ಗ್ರಾಂ
* ತುಪ್ಪ – 4 to 6 ಚಮಚ
* 1/4 cup ಕೊಬ್ಬರಿ ತುರಿ

ಮಾಡುವ ವಿಧಾನ:
* ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಕೆಂಪಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.

* ನಂತರ ಬೇಳೆ ಮತ್ತು ಅಕ್ಕಿಯನ್ನು ಚೆನ್ನಾಗಿ ತೊಳೆದು ಕುಕ್ಕರಿನಲ್ಲಿ ಮೂರರಿಂದ ನಾಲ್ಕು ಸಿಟಿ ಕೂಗಿಸಿ ಸ್ವಲ್ಪ ತಣ್ಣಗಾಗಲು ಬಿಡಿ.

* ಒಂದು ಚಮಚ ತುಪ್ಪವನ್ನು ಬಿಸಿ ಮಾಡಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಬೇರೆ ಬೇರೆಯಾಗಿ ಹುರಿದು ಇಟ್ಟುಕೊಳ್ಳಿ .

* ಮತ್ತೊಂದು ಪ್ಯಾನ್ ನಲ್ಲಿ ಪುಡಿಮಾಡಿದ ಬೆಲ್ಲ ಹಾಕಿ ಕರಗಿಸಿ ಅದನ್ನು ಸೋಸಿ ಕಸ ತೆಗೆದು ಇಟ್ಟುಕೊಳ್ಳಿ.

* ಸೋಸಿದ ಬೆಲ್ಲವನ್ನು ಒಂದು ದಪ್ಪ ತಳದ ಪಾತ್ರೆಯಲ್ಲಿ ಕುದಿಯಲು ಇಡಿ. ಗಟ್ಟಿಯಾದ ಮೇಲೆ ಅದಕ್ಕೆ ಬೆಂದ ಅಕ್ಕಿ ಬೇಳೆಯನ್ನು ಸ್ವಲ್ಪ ತುಪ್ಪದೊಂದಿಗೆ ಹಾಕಿ ಚೆನ್ನಗಿ ಕಲಕಿ 5 ನಿಮಿಷ ಸಣ್ಣ ಉರಿಯಲ್ಲಿ ಹಾಗೆ ಬೇಯಲು ಬಿಡಿ.

* ಈಗ ಕೊಬ್ಬರಿ, ಏಲಕ್ಕಿ ಪುಡಿಯನ್ನು ಹಾಕಿ ಕಲಕಿ ಸಣ್ಣ ಉರಿಯಲ್ಲಿ ಒಂದು ನಿಮಿಷ ಬೇಯಲು ಬಿಡಿ ನಂತರ ಒಲೆಯನ್ನು ಆರಿಸಿ.

* ಹುರಿದಿಟ್ಟ ದ್ರಾಕ್ಷಿ ಗೋಡಂಬಿಯನ್ನು ಹಾಕಿ ಕಲಸಿ, ಸಿಹಿ ಹುಗ್ಗಿಯನ್ನು ಬಿಸಿಯಾಗಿ ಸವಿಯಿರಿ.

ಎಲ್ಲರಿಗೂ ಮತ್ತೊಮ್ಮೆ ಸಂಕ್ರಾತಿಯ ಹಬ್ಬದ ಶುಭಾಶಯಗಳು


sweet-pongal-recipe_2020.jpg

English summary :Sakkarai Pongal (Sweet Pongal) recipe

ಭಾರತೀಯ ವಾಯುಪಡೆಯ ಎಎನ್-32 ವಿಮಾನ ಪತನ : ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿ
ಭಾರತೀಯ ವಾಯುಪಡೆಯ ಎಎನ್-32 ವಿಮಾನ ಪತನ : ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿ
ಮೂವರು ಭಾರತೀಯ ನಾವಿಕರ ಸಾವಿನ ಬಗ್ಗೆ ಅಮೆರಿಕದೊಂದಿಗೆ ವಿದೇಶಾಂಗ ಮಂತ್ರಿ ಜೈಶಂಕರ್ ತೀವ್ರ ಪ್ರತಿಭಟನೆ
ಮೂವರು ಭಾರತೀಯ ನಾವಿಕರ ಸಾವಿನ ಬಗ್ಗೆ ಅಮೆರಿಕದೊಂದಿಗೆ ವಿದೇಶಾಂಗ ಮಂತ್ರಿ ಜೈಶಂಕರ್ ತೀವ್ರ ಪ್ರತಿಭಟನೆ
ಇರಾನಿನ ನೆಲೆಗಳನ್ನು ಸಂಪೂರ್ಣವಾಗಿ ನಾಶಲು ಅಮೆರಿಕ ಪ್ರತಿಜ್ಞೆ : ಟೆಹ್ರಾನ್ ಮೇಲೆ 200 ಕ್ಕೂ ಹೆಚ್ಚು ಕ್ಷಿಪಣಿಗಳು ದಾಳಿ
ಇರಾನಿನ ನೆಲೆಗಳನ್ನು ಸಂಪೂರ್ಣವಾಗಿ ನಾಶಲು ಅಮೆರಿಕ ಪ್ರತಿಜ್ಞೆ : ಟೆಹ್ರಾನ್ ಮೇಲೆ 200 ಕ್ಕೂ ಹೆಚ್ಚು ಕ್ಷಿಪಣಿಗಳು ದಾಳಿ
ಪ್ರಧಾನಿ ಮೋದಿ ಯವರನ್ನು ಮುಖ್ಯಮಂತ್ರಿಯಾಗಿ ಮೊದಲ ಬಾರಿ  ಭೇಟಿಯಾದ ಡಿಕೆ.ಶಿವಕುಮಾರ
ಪ್ರಧಾನಿ ಮೋದಿ ಯವರನ್ನು ಮುಖ್ಯಮಂತ್ರಿಯಾಗಿ ಮೊದಲ ಬಾರಿ ಭೇಟಿಯಾದ ಡಿಕೆ.ಶಿವಕುಮಾರ
ರಾಜ್ಯಸಭಾ ಸ್ಥಾನಕ್ಕಾಗಿ ಮಾತ್ರ ನನಗೆ ಪ್ರಧಾನಿ ಮೋದಿ ಅವರೊಂದಿಗಿನ ಸಂಬಂಧವಿಲ್ಲ - ಮಾಜಿ ಪ್ರಧಾನಿ ಎಚ್‌ಡಿ.ದೇವೇಗೌಡ
ರಾಜ್ಯಸಭಾ ಸ್ಥಾನಕ್ಕಾಗಿ ಮಾತ್ರ ನನಗೆ ಪ್ರಧಾನಿ ಮೋದಿ ಅವರೊಂದಿಗಿನ ಸಂಬಂಧವಿಲ್ಲ - ಮಾಜಿ ಪ್ರಧಾನಿ ಎಚ್‌ಡಿ.ದೇವೇಗೌಡ
ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿ ಮೋದಿ : ವಿಶ್ವ ನಾಯಕರಿಂದ ಹರಿದು ಬಂದ ಅಭಿನಂದನೆಗಳು
ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿ ಮೋದಿ : ವಿಶ್ವ ನಾಯಕರಿಂದ ಹರಿದು ಬಂದ ಅಭಿನಂದನೆಗಳು
ನಿಮ್ಮ ಅಪ್ಪನ ಕೈಯಲ್ಲಿ ಏನು ಮಾಡಲು ಆಗಿಲ್ಲ ನೀವೇನು ಮಾಡುತ್ತೀರಿ? - ಸಚಿವ ಪ್ರಿಯಾಂಕ ಖರ್ಗೆ ಗೆ ಸಿಟಿ.ರವಿ ಸವಾಲು
ನಿಮ್ಮ ಅಪ್ಪನ ಕೈಯಲ್ಲಿ ಏನು ಮಾಡಲು ಆಗಿಲ್ಲ ನೀವೇನು ಮಾಡುತ್ತೀರಿ? - ಸಚಿವ ಪ್ರಿಯಾಂಕ ಖರ್ಗೆ ಗೆ ಸಿಟಿ.ರವಿ ಸವಾಲು
ಕನಕಪುರಕ್ಕೆ ಹೋಗಲು ಟ್ರಾಫಿಕ್ ಸಮಸ್ಯೆ ಉಂಟುಮಾಡದೆ, ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ ಸಿಎಂ ಡಿಕೆಶಿ
ಕನಕಪುರಕ್ಕೆ ಹೋಗಲು ಟ್ರಾಫಿಕ್ ಸಮಸ್ಯೆ ಉಂಟುಮಾಡದೆ, ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ ಸಿಎಂ ಡಿಕೆಶಿ
ರಾಮಲಿಂಗ ರೆಡ್ಡಿ ಅವರು ನನಗೆ ರಾಜೀನಾಮೆ ಸ್ವೀಕಾರ ಮಾಡಲ್ಲ -ಸಿಎಂ ಡಿಕೆ.ಶಿವಕುಮಾರ್
ರಾಮಲಿಂಗ ರೆಡ್ಡಿ ಅವರು ನನಗೆ ರಾಜೀನಾಮೆ ಸ್ವೀಕಾರ ಮಾಡಲ್ಲ -ಸಿಎಂ ಡಿಕೆ.ಶಿವಕುಮಾರ್
ಅಂಡಮಾನ್ ದ್ವೀಪದ ಸಮೀಪ ತೈಲ ನಿಕ್ಷೇಪ : ಆಯಿಲ್ ಇಂಡಿಯಾ ಲಿಮಿಟೆಡ್ ಗೆ ಅಭಿನಂದನೆ ಸಲ್ಲಿಸಿದ ಪೆಟ್ರೋಲಿಯಂ ಸಚಿವ ಸಿಂಗ್
ಅಂಡಮಾನ್ ದ್ವೀಪದ ಸಮೀಪ ತೈಲ ನಿಕ್ಷೇಪ : ಆಯಿಲ್ ಇಂಡಿಯಾ ಲಿಮಿಟೆಡ್ ಗೆ ಅಭಿನಂದನೆ ಸಲ್ಲಿಸಿದ ಪೆಟ್ರೋಲಿಯಂ ಸಚಿವ ಸಿಂಗ್
ರಾಮಲಿಂಗಾ ರೆಡ್ಡಿ ರಾಜೀನಾಮೆ: ಖಾತೆ ಹಂಚಿಕೆ ನಂತರ ಸಂಪುಟ ಬಿಕ್ಕಟ್ಟು
ರಾಮಲಿಂಗಾ ರೆಡ್ಡಿ ರಾಜೀನಾಮೆ: ಖಾತೆ ಹಂಚಿಕೆ ನಂತರ ಸಂಪುಟ ಬಿಕ್ಕಟ್ಟು
ಸಿಎಂ ಡಿಕೆ.ಶಿವಕುಮಾರ ನೇತ್ರತ್ವದಲ್ಲಿ ಕರ್ನಾಟಕ ಸಂಪುಟ ಖಾತೆ ಹಂಚಿಕೆ
ಸಿಎಂ ಡಿಕೆ.ಶಿವಕುಮಾರ ನೇತ್ರತ್ವದಲ್ಲಿ ಕರ್ನಾಟಕ ಸಂಪುಟ ಖಾತೆ ಹಂಚಿಕೆ

ಜನತಾ ರುಚಿ MORE RECIPE...